Saturday, November 3, 2007

ರಾಮ ಸೇತು

ಒಂದು ದಿನ ಶ್ರೀ ರಾಮ ಬಹಳ ಬೇಜಾರಿನಿಂದ ತನ್ನ ಪರಮ ಭಕ್ತ ಹನುಮಂತ ನ ಕರೆದು ಹೇಳ್ತಾನೇ। ನೋಡೋ ನೀನು ಸಾವಿರಾರು ಶತಮಾನ ಗಳ ಮುಂಚೆ ಕಟ್ಟಿದ ರಾಮ ಸೇತು ಎಷ್ಟು ಚನ್ನಾಗಿ ಇದೆಯಪ್ಪ , ಯಾವ್ದೇ ಮಳೆ ಗಾಳಿಗು ಏನು ಆಗಿಲ್ಲ . ಆಂದ್ರ ಪ್ರದೇಶದಲ್ಲಿ ಯಾವ್ದೋ ಗ್ಯಾಮನ್ ಅನ್ನೋ ಕಂಪನೀ ಕಟ್ಟಿರೋ ಬ್ರಿಡ್ಜ್ ಅಂತೆ ,ಪಾಪ ಅದ್ರ ಕಂಬಕ್ಕೆ ಪೋಸ್ಟರ್ ಬ್ಯಾನರ್ ಹಾಕ್ಕೋ ಮುಂಚೆ ನೇ ಬಿದ್ದು ಹೋಯ್ತ್ತಂತೆ !!!!. ಆಗ ಹನುಮಂತ ಭಕ್ತಿಯಿಂದ ಜೈ ಶ್ರೀ ರಾಮ ,ಅದು ಎಲ್ಲ ನಿನ್ನ ಭಕ್ತಿ ಯ ಶಕ್ತಿ ಯ ಫಲ , ನಿನ್ನ ಅಪ್ಪಣೆ ಇಲ್ಲ ಅಂದ್ರೆ ಒಂದು ಕಡ್ಡಿ ನು ನಿಲ್ಲೊದಿಲ್ಲ. ನಾವು ಸುಮ್ಮನೇ ನಿನ್ನ ಹೆಸ್ರುನ್ನ ಕಲ್ಲಿನ ಮೇಲೆ ಬರದು ನೀರಲ್ಲಿ ಹಾಕದ್ದು ಮಾತ್ರ ,ಯಾವ ಟಿಸ್ಕೊ ಸ್ಟೀಲ್ ,ಲಕ್ಸ್ಮಿ ಪುತ್ರ ಮಿತ್ತಲ್ ಕಬ್ಬಿಣ,ಅಥವಾ ಅಂಬುಜ ಸೆಮೆಂಟ್ ನ ಯೂಸ್ ಮಾಡಿಲ್ಲ್ಲ. ಆದು ಇರ್‍ಲಿ ಅದನ್ನ ಈಗ ಯಾಕೆ ಕೇಳ್ತಾ ಎದ್ದೀರಾ ಪ್ರಭು... ತುಂಬಾ ಓಲ್ಡ್ ಸ್ಟೋರೀ ಅಲ್ವಾ ಇದು.।ಆಗ ರಾಮ ಅದು ಏನಕ್ಕೆ ಅಂದ್ರೆ ಕೆಳಗಡೆ ನನ್ನ ಬ್ರಿಡ್ಜ್ ಗೆ ಸಲ್ಪ ಪ್ರಾಬ್ಲಮ್ ಆಗಿದೆ ಮಾರಾಯ ಯಾರೋ ಸಲ್ಪ ಜನ ಅದನ್ನ ಬೀಳಿಸಿ ಒಂದು ಸುರಂಗ ಮಾಡ್ತರ್ ಅಂತೆ। ಈ ಪ್ರಾಜೆಕ್ಟ್ ನಲ್ಲಿ ಸಿಕ್ಕಾಬಟ್ಟೆ ಕಮಿಶನ್ ಸಿಕ್ಕುತ್ತಾಂತೆ, ಮೊದ್ದ್ಲು ನನ್ನ ಬ್ರಿಡ್ಜ್ ಬೀಳಿಸಕ್ಕೆ ಆಮೇಲೇ ಹೊಸ ಸುರಂಗ ಮಾಡೋಕ್ಕೆ ಎರಡು ಕೆಲ್ಸಾ ದಲ್ಲೂ ಸಿಕ್ಕಾಬಟ್ಟೆ ದುಡ್ಡು ತಿಂತಾರೆ !!. ಆಗ ಹನುಮಂತ ಅಯ್ಯೊ ನಾವು ಏನು ಮಾಡೋಣ ಇಗ ಭೂಮಿ ಗೆ ಹೋಗಿ ಬ್ರಿಡ್ಜ್ ನಮ್ಮ್ ದು ಅಂತ ಕ್ಲೇಮ್ ಮಾಡೋಣ ಅಲ್ವಾ . ಆಗ ರಾಮ ಹನುಮಂತ ನಿನಗೆ ಗೊತ್ತಿಲ ಕೆಳಗಡೆ ತುಂಬಾ ಬದಲಾಗೆದೆ ಕಣಪ್ಪ , ನಮ್ಮ ಕಾಲದ ತರ ಇಲ್ಲ , ನಾವು ಕೆಳಗೆ ಹೋದ್ರೆ ಫರ್ಸ್ಟ್ ನಮ್ಮ ಏಜ್ ಪ್ರೊಫ್ ಗೆ ಸರ್ಟಿಫಿಕೇಟ್ ಕೊಡಿ ಅಂತಾರೆ !! , ಅಥ್ವಾ ಡ್ರೈವಿಂಗ್ ಲೈಸೆನ್ಸ್ನಾದ್ರು ಇಟ್ಕೋಬೇಕು , ಅವ್ನು ಎಲ್ಲ ಎಲ್ಲಿಂದ ತರ್ಲಿ !! ,ಮತ್ತೆ ನನ್ನ ಬರ್ತ್ ಪ್ಲೇಸ್ ಅಯೋಧ್ಯಾ ಅಂದ್ರೆ ಇನ್ನೂ ತೊಂದರೆ , ಯಾಕ್‌oದ್ರೆ ಮೊದ್ಲೆ ಅಯೋಧ್ಯಾ ಇತ್ತೊ ಇಲ್ವೋ ಅಂತ ಒಂದು ಕೇಸ್ 50 ವರ್ಷ ದಿಂದ ಸುಪ್ರೀಮ್ ಕೌರ್ಟೇನಲ್ಲಿ ನಡೀತಾ ಇದೆ !!। ಯಾರು ನಂಬಲ್ಲ ನಾನು ಹುಟ್ಟಿದು ಅಲ್ಲಿ ಅಂದ್ರೆ , ಬರ್ತ್ ಸರ್ಟಿಫಿಕೇಟ್ ತಗೋ ಬಾ ಅಂತಾರೆ.
ಮತ್ತೆ ನಾನು ಈ ತರ ಡ್ರೆಸ್ ನಲ್ಲಿ ಕೆಳಗೆ ಹೋದ್ರೆ ಇನ್ನೂ ಪ್ರಾಬ್ಲಮ್ , ಈ ಥ್ರೀ ಪಿಸು ಡ್ರೆಸ್ ನೋಡಿ ನಂಗೆ ಇರೋ ಸ್ವಲ್ಪ ಅಭಿಮಾನಿಗಳು ನಾನೇ ರಾಮ ಅಂತ ನಂಬಲ್ಲ ಏನು ಮಾಡೋ ದು ।ಆಗ ಹನುಮಂತ ನಾನೇ ಕೆಳಗಡೆ ಹೋಗಿ ಪ್ರತಿಪಾದನೆ ಮಾಡ್ತೀನಿ ನಾನೇ ಬ್ರಿಡ್ಜ್ ಕಟ್ಟಿದು ಅಂತ ನೀವು ಬೇಜಾರು ಮಾಡ್ಕೋ ಬೇಡಿ । ಆಗ ರಾಮ ನಗ್ತಾ ಹನುಮಂತ ಅದು ನೀನು ಹೇಳೋ ಅಷ್ಟು ಸುಲಭ ಇಲ್ಲ , ಆವ್ರು ಮೊದಲು ನಿನ್ನ ಬ್ರಿಡ್ಜ್ ನ ಲೇಯೌಟ್ ಪ್ಲಾನ್ , ಪ್ರಾಜೆಕ್ಟ್ ಡೀಟೇಲ್ಸ್ , ಫೈನಾನ್ಶಿಯಲ್ ಔಟ್ ಲೇ , ಮತ್ತು ಕಂಪ್ಲೀಶನ್ ಸರ್ಟಿಫಿಕೇಟ್ ಕೇಳ್ತಾರೆ , ಭಾರತ ದಲ್ಲಿ ದಾಖಲೆ ಇಲ್ಲ ಅಂದ್ರೆ ಏನನ್ನು ಓಪಲ್ಲ ಕಣಪ್ಪ । ನಿನಗೆ ಕೆಮ್ಮು ಅಂದ್ರೂ ಡಾಕ್ಟರ್ ಸರ್ಟಿಫಿಕೇಟ್ ಕೊಡೋ ವರಗೆ ಯಾರು ನಂಬಲ್ಲ ಇದು ಸಂಕೀರ್ಣ ಸಿಸ್ಟಮ್ ಕಣಪ್ಪ । ಆಗ ಹನುಮಂತ ನಂಗೆ ಇದೆಲ್ಲ ಅರ್ಥ ಆಗಲ್ಲ , ಇಗ ನಾವು ಮತ್ತೆ ರಾಮಾಯಣ ನ ಆಕ್ಟ್ ಮಾಡಕ್ಕೆ ಆಗುತ್ತಾ !! ಇವರ ಡಾಕ್ಯುಮೆಂಟ್ಸ್ ಗೋಸ್ಕರ? ,, ದೆವ್ರೆ ಏನು ಕಾಲ ಬಂತಪ್ಪ . ಆಗ ರಾಮ ನಗ್ತಾ ಹನುಮಂತ ಈಗ ಅ ರಾಮಾಯಣ ನ ಆಕ್ಟ್ ಮಾಡೂಡು ತುಂಬಾ ಕಷ್ಟ.
ರಾಮಾಯಣದ ಟರ್ನಿಂಗ್ ಪಾಯಂಟ್ ಆದ ಮರೀಚ ನೇ ಬರೊಕ್ಕೆ ಓಪಲ್ಲ ಅವನಿಗೆ ಸಾಲ್ಮನ್ ಖಾನ್ ದೇ ದಿಗುಲು, ಅವನ್ನ್ ನ ಜೈಲ್ ಗೆ ಹಾಕೋವರಗೆ ಅವ್ನು ಭೂಮಿ ಗೆ ಬರಲ್ಲ ವಂತೆ , ಆವ್ನು ಬಂದಿಲ್ಲ ಅಂದ್ರೆ ನಿನ್ನ ಸೀತ ಮಯ್ಯ ಜಿಂಕೆ ನೋಡ್ ದು ಹೆಂಗೆ ,ರಾವಣ ಬರ್ರೋದು ಹೆಂಗೆ , ರಾಮಾಯಣ ನೇ ಆಗೋಲ್ಲ , ಕಾಲ ಚೇಂಜ್ ಆಯ್ತಪ್ಪ . ಸಲ್ಪ ದಿನ ವೇಟ್ ಮಾಡಿ ನೋಡನ್ನ ಏನು ಆಗುತ್ತೆ ಅಂತ ಬ್ರಿಡ್ಜ್ ಕಥೆ ...
--ಜೈ ಶ್ರೀ ರಾಮ್
ಪ್ರೇರಣೆ : ಆಂಗ್ಲ ಲೇಖನ